ಕಿ.ರಂ.ನಾಗರಾಜ್ ಅವರು ಕನ್ನಡ ಶ್ರವ್ಯ ಪರಂಪರೆಯ ನೇತಾರ. ಸಾಹಿತ್ಯ ಕಾರ್ಯಕ್ರಮದಲ್ಲಿ ಸಭಿಕರ ಮಧ್ಯೆ ಜಾಗ ಮಾಡಿಕೊಂಡು ಸಾಮಾನ್ಯರಂತೆಯೇ ಕೂರುತ್ತಿದ್ದ ಅವರ ಅಪಾರ ಓದಿನ ಬಗ್ಗೆ ನನಗೆ ಅಸೂಯೆ! ಅವರನ್ನು ಕಂಡಾಗಲೆಲ್ಲ ಬೆರಗು. ಬೇಂದ್ರೆ, ಅಡಿಗ, ಅಲ್ಲಮನ ಕಾವ್ಯಗಳ ಬಗ್ಗೆ ಮಾತು ತೆಗೆದರೆ ತಮ್ಮನ್ನು ತಾವೇ ಮರೆಯುತ್ತಿದ್ದರು. ಅವರ ಸಾಹಿತ್ಯ ನಿಶೆ ಕಂಡು ನನಗೆ ಹೊಟ್ಟೆ ಉರಿ.
‘ಕವಿತೆ ಕವಿತೆ ಅಷ್ಟೇ. ಅದು ಎಂದಿಗೂ ಘೋಷಣೆಯಾಗಬಾರದು, ಭಾಷಣವಾಗಬಾರದು. ಅದಕ್ಕೆ ಬೇರೇನೂ ಮಾಡಬೇಡಿ. ಅದರ ಪಾಡಿಗೆ ಬಿಡಿ’ ಎಂದಿದ್ದ ಕಿ.ರಂ ಇನ್ನಿಲ್ಲ.. ಛೇ, ಅವರು ಇನ್ನಷ್ಟು ದಿನ ತಮ್ಮ ಅಪಾರ ಓದಿನಿಂದ ನನ್ನ ಹೊಟ್ಟೆ ಉರಿಸಬೇಕಿತ್ತು..
ಆಗಸ್ಟ್7