ಇ ದು ಮತ್ತೊಂದು ಸುಂಟರಗಾಳಿ. ಬೆಂಗಳೂರಿನ ಪತ್ರಿಕಾಲೋಕದಲ್ಲಿ ಈಗ ಸುಂಟರಗಾಳಿ ಎಬ್ಬಿಸಿರುವುದು ಡಿಎನ್ಎ! ಈ ಹಿಂದೆ ಮುಂಬಯಿ ಪದರಗುಟ್ಟಿಸಿ, ತನ್ನ ಜಾಗ ಭದ್ರಪಡಿಸಿಕೊಂಡ ಡಿಎನ್ಎ ಕಣ್ಣೀಗ ಬೆಂಗಳೂರಿನತ್ತ. ನಿರೀಕ್ಷೆಯಂತೆಯೇ ಆದರೆ ವರ್ಷಾಂತ್ಯಕ್ಕೆ ಪತ್ರಿಕೆ ಓದುಗರ ಕೈ ಸೇರುತ್ತದೆ.
‘Might Is Right’ ಎನ್ನುವುದು ಪತ್ರಿಕೋದ್ಯಮಕ್ಕೂ ಅನ್ವಯ. ಈಗಿನ ಸ್ಪರ್ಧೆ ಪರಿಣಾಮ ಗಟ್ಟಿಗರು ಮಾರುಕಟ್ಟೆಯಲ್ಲಿ ಉಳಿಯುತ್ತಾರೆ, ಇತರರು ಬದಿಗೆ ಸರಿಯುತ್ತಾರೆ. ಸ್ಪರ್ಧೆ ಎನ್ನುವುದು ಎಂದಿಗೂ ಒಳ್ಳೆಯದೇ. ಆದರದು ಅನಾರೋಗ್ಯಕರವಾಗಿದ್ದರೆ ಕಷ್ಟ. ಅದರಲ್ಲೂ ಮಾಧ್ಯಮರಂಗದಲ್ಲಿನ ಈ ರೋಗಗ್ರಸ್ಠ ಸ್ಪರ್ಧೆಯಿಂದ ಒಲಿತನ್ನು ನಿರೀಕ್ಷಿಸಲಾಗದು.
‘ವಿಜಯ ಕರ್ನಾಟಕ ’ ಹಿಂದೆ ಇಂಥದ್ದೊಂದು ಕದಲಿಕೆಯನ್ನು ಕನ್ನಡ ಪತ್ರಿಕೋದ್ಯಮದಲ್ಲಿ ಉಂಟು ಮಾಡಿತ್ತು. ಪ್ರಜಾವಾಣಿ, ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ಉದಯವಾಣಿ ಮಾತ್ರವಲ್ಲದೇ ಸ್ಥಳೀಯ ಪತ್ರಿಕೆಗಳ ಪ್ರಸರಣಕ್ಕೆ ಕೈಹಾಕಿದ ವಿಜಯ ಕರ್ನಾಟಕ, ನಾಡಿನ ನಂ.೧ ಪತ್ರಿಕೆಯಾದದ್ದು ಎಲ್ಲರಿಗೂ ತಿಳಿದ ಸಂಗತಿ. ಪತ್ರಿಕೆಯ ಪ್ರಯೋಗಶೀಲತೆ, ಹೊಸತಿನ ತುಡಿತದ ಬಗ್ಗೆ ಎರಡು ಮಾತಿಲ್ಲ. ನಿಂತು ನೀರಾಗಿದ್ದ ಕನ್ನಡ ಪತ್ರಿಕೋದ್ಯಮದಲ್ಲಿ ಚಲನಶೀಲತೆಗೆ ಕಾರಣವಾಗಿದ್ದು ಪತ್ರಿಕೆಯ ಹೆಗ್ಗಳಿಕೆ. ಆದರೆ ಅದು ಆರಂಭಿಸಿದ ದರ ಸಮರದಿಂದ ಸಣ್ಣ ಪತ್ರಿಕೆಗಳು ಬಾಗಿಲು ಹಾಕಿಕೊಂಡದ್ದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ.
ಈಗ ಬೆಂಗಳೂರಿನಲ್ಲಿ ಕಣ್ತೆರೆಯಲು ಸಿದ್ಧತೆ ನಡೆಸಿರುವ ಡಿಎನ್ಎ, ಬೆಂಗಳೂರಿನಲ್ಲಿ ೩ ಲಕ್ಷ ಪ್ರಸರಣ ಹೊಂದಲು ಸಂಕಲ್ಪಿಸಿದೆ. ಅಂದಹಾಗೇ, ಬೆಂಗಳೂರಿನ ಎಲ್ಲಾ ಆಂಗ್ಲ ಪತ್ರಿಕೆಗಳ ಪ್ರಸರಣ ಸಂಖ್ಯೆ ೬.೫೦ ಲಕ್ಷ. ಅದರಲ್ಲಿ ಅರ್ಧದಷ್ಟನ್ನು ಬಾಚಲು, ಅದರ ಲಕ್ಷ್ಯ. ಡಿಎನ್ಎ ಸದ್ದಿಗೆ ಈಗಲೇ ಅರೆಜೀವವಾಗಿರುವ ಡೆಕ್ಕನ್ ಹೆರಾಲ್ಡ್ ಬೆಚ್ಚಿ ಬಿದ್ದಿದೆ.
ಜಾಹೀರಾತು ಮಾರುಕಟ್ಟೆ ದೃಷ್ಟಿಯಿಂದ ಬೆಂಗಳೂರಿಗೆ ಅಗ್ರ ಸ್ಥಾನವಿದೆ. ಹೀಗಾಗಿಯೇ ಎಲ್ಲರಿಗೂ ಬೆಂಗಳೂರಿನ ಬಗ್ಗೆ ಅಕ್ಕರೆ. ಜಾಹೀರಾತು ಮಾರುಕಟ್ಟೆಯಲ್ಲಿ ಮುಂಬಯಿ, ದಿಲ್ಲಿ ಬಿಟ್ಟರೆ ಬೆಂಗಳೂರಿಗೆ ಮೂರನೇ ಸ್ಥಾನ. ಬೆಂಗಳೂರಿನಲ್ಲಿ ವಾರ್ಷಿಕ ೫೦೦ ಕೋಟಿಗೂ ಅಕ ಜಾಹೀರಾತು ವಹಿವಾಟು ನಡೆಯುತ್ತದೆ. ಮುಂಬಯಿನಲ್ಲಿ ಮೂರುಪಟ್ಟು ಅಂದರೆ ೧೫೦೦ ಕೋಟಿ ರೂಪಾಯಿ ವಹಿವಾಟು ನಡೆಯುತ್ತದೆ. ಜನರಿಗೆ ಅರಿವು ಆನಂದ ನೀಡುವುದಕ್ಕಿಂತಲೂ, ಇಲ್ಲಿನ ಜಾಹೀರಾತು ಮಾರುಕಟ್ಟೆಯನ್ನು ಗಮದಲ್ಲಿಟ್ಟುಕೊಂಡೇ ಡಿಎನ್ಎ ಥರದ ಪತ್ರಿಕೆಗಳು ಇತ್ತ ನುಗ್ಗುತ್ತಿವೆ.
ದಿ ಟೈಮ್ಸ್ ಆಫ್ ಇಂಡಿಯಾ, ಡೆಕ್ಕನ್ ಕ್ರೋನಿಕಲ್, ಬೆಂಗಳೂರ್ ಮಿರರ್, ಮಿಡ್-ಡೇ, ಡೆಕ್ಕನ್ ಹೆರಾಲ್ಡ್, ಇಂಡಿಯನ್ ಎಕ್ಸ್ಪ್ರೆಸ್, ದಿ ಹಿಂದೂ ಪತ್ರಿಕೆಗಳಲ್ಲಿನ ಪ್ರತಿಭಾವಂತರನ್ನು ಹೆಕ್ಕಿ ತನ್ನ ಮಡಿಲಿಗೆ ಹಾಕಿಕೊಳ್ಳಲು ಡಿಎನ್ಎ ಮುಂದಾಗಿದೆ. ಮೂರು ಪಟ್ಟು ಹೆಚ್ಚಿನ ಸಂಬಳದ ಆಮಿಷಕ್ಕೆ ಪತ್ರಕರ್ತರು ಮರುಳಾಗುತ್ತಿದ್ದಾರೆ. ಪತ್ರಿಕಾಲಯಗಳಲ್ಲಿ ವಲಸೆ ಆರಂಭಗೊಂಡಿದೆ. ೧೫-೨೦ ಸಾವಿರ ಪಡೆಯುತ್ತಿದ್ದ ಪತ್ರಕರ್ತರಿಗೆ ೫೦-೬೦ ಸಾವಿರ ಸಂಬಳ ನೀಡಲು ಡಿಎನ್ಎ ಮುಂದಾಗಿದೆ. ಹಣ ಹಿಂಬಾಲಿಸುವ ಪತ್ರಕರ್ತರು, ಹಳೆಯ ಪತ್ರಿಕೆಗಳಿಗೆ ನಮಸ್ಕಾರ ಹಾಕಿ ಡಿಎನ್ಎ ಬಾಗಿಲಲ್ಲಿ ನಿಂತಿದ್ದಾರೆ. ಪತ್ರಿಕಾರಂಗ, ಉದ್ಯಮ(ಪತ್ರಿಕೋದ್ಯಮ)ವಾದ ಮೇಲೆ ಎಲ್ಲಾ ಕ್ಷೇತ್ರದಂತೆ ಇಲ್ಲೂ ಲಾಭ-ನಷ್ಟದ್ದೇ ಲೆಕ್ಕಾಚಾರ. ಈ ಅಬ್ಬರದಲ್ಲಿ ಸುದ್ದಿ ಮೌಲ್ಯ Out dated ಆಗಿದೆ. ಪತ್ರಕರ್ತರಿಗೆ ಒಳ್ಳೆಯ ಸಂಬಳ ಸಿಗುತ್ತಿದೆ ಎನ್ನುವುದಕ್ಕೆ ನನ್ನ ಖುಷಿಯಿದೆ. ಆದರೆ ಪತ್ರಕರ್ತರ ಕುದುರೆ ವ್ಯಾಪಾರದ ಬಗ್ಗೆ ನನ್ನದು ದೊಡ್ಡ ತಕರಾರು.
ಡಿಎನ್ಎ ಚರಿತೆ
ಡಿಎನ್ಎ(ಡೈಲಿ ನ್ಯೂಸ್ ಅಂಡ್ ಅನಾಲಿಸಿಸ್) ಎಂಬುದು ಇಂಗ್ಲಿಷ್ ದೈನಿಕ. ಮುಂಬಯಿ, ಅಹಮದಾಬಾದ್, ಸೂರತ್, ಪುಣೆ ಮತ್ತು ಜೈಪುರದಲ್ಲಿ ತನ್ನ ಆವೃತ್ತಿಗಳನ್ನು ಹೊಂದಿರುವ ಈ ಪತ್ರಿಕೆ ಆರಂಭಗೊಂಡಿದ್ದು ಜುಲೈ ೩೦, ೨೦೦೫. ಯುವ ಓದುಗರನ್ನು ಗುರಿ ಮಾಡಿಕೊಂಡ ಡಿಎನ್ಎ, ಭಾರತದ ವೇಗವಾಗಿ ಬೆಳೆಯುತ್ತಿರುವ ಆಂಗ್ಲ ಪತ್ರಿಕೆ ಪ್ರಮುಖವಾದುದು.
ದಿ ದೈನಿಕ್ ಭಾಸ್ಕರ್ ಸಮೂಹ ಮತ್ತು ಎಸ್ಸೆಲ್ ಸಮೂಹ ಸೇರಿದಂತೆ ಮಾಧ್ಯಮ ಲೋಕದ ನಾನಾ ಉದ್ಯಮಿಗಳು ಸೇರಿ ಮಾಡಿಕೊಂಡಿರುವ Diligent Media Corporation, ಡಿಎನ್ಎ ಪತ್ರಿಕೆಯ ಒಡೆತನವನ್ನು ಹೊಂದಿದೆ. ‘Speak up, it’s in your DNA’ ಘೋಷವಾಕ್ಯವನ್ನು ಜಾಹೀರಾತಿನಲ್ಲಿ ಬಿಂಬಿಸಿ, ಡಿಎನ್ಎ ಓದುಗರನ್ನು ಆಕರ್ಷಿಸಿದೆ.
ಆರಂಭದಲ್ಲಿ ಹತ್ತರಲ್ಲಿ ಹನ್ನೊಂದರಂತಿದ್ದ ಪತ್ರಿಕೆ ನೋಡನೋಡುತ್ತಲೇ ಬದಲಾಗಿದೆ. ದರ ಕಡಿತ, ಸ್ಪರ್ಧಾತ್ಮಕ ವಸ್ತು ವಿಶೇಷಗಳೊಂದಿಗೆ ಅದು ಜಾಗ ಮಾಡಿಕೊಂಡಿದೆ. ಸುರ್ ಅಗರ್ವಾಲ್, ಆರ್.ಜಗನ್ನಾಥನ್, ಸಿದ್ಧಾರ್ಥ್ ಭಾಟಿಯಾ, ವಿನಯ್ ಕಾಮತ್, ಮಾಳವಿಕಾ ಸಾಂಘ್ವಿ, ಶಿವ್ ವಿಶ್ವನಾಥನ್ ಡಿಎನ್ಎ ಪುಟಗಳಿಗೆ ಜೀವ ತುಂಬುತ್ತಿದ್ದಾರೆ. ಭಾರತದಲ್ಲಿ ಮೊದಲ ಭಾರಿಗೆ ಸಂಪೂರ್ಣ ವರ್ಣದ ಪುಟಗಳನ್ನು ನೀಡಿದ್ದು ಡಿಎನ್ಎ ಹೆಗ್ಗಳಿಕೆ.
ಐಆರ್ಎಸ್(ಇಂಡಿಯನ್ ರೀಡರ್ಶಿಪ್ ಸರ್ವೆ) ಪ್ರಕಾರ ಡಿಎನ್ಎ ಒಟ್ಟು ಓದುಗರ ಸಂಖ್ಯೆ ೬,೭೬,೦೦೦. ಭಾರತದ ‘ಟಾಪ್ ೧೦’ ಆಂಗ್ಲ ಪತ್ರಿಕೆಗಳಲ್ಲಿ ಈ ಪತ್ರಿಕೆಗೆ ೮ನೇ ಸ್ಥಾನ. ಮುಂಬಯಿನ ಅತಿ ಹೆಚ್ಚು ಪ್ರಸರಣ ಪತ್ರಿಕೆಗಳಲ್ಲಿ ಡಿಎನ್ಎಗೆ ಎರಡನೇ ಸ್ಥಾನ. ೨೦೦೭ರಲ್ಲಿ ಮುಂಬಯಿನಲ್ಲಿ ಪತ್ರಿಕೆಯ ಪ್ರಸರಣ ಸಂಖ್ಯೆ ಡಿಎನ್ಎ ಹೇಳುವ ಪ್ರಕಾರ, ೪ಲಕ್ಷ. ಅಕ್ಟೋಬರ್ ೨೦೦೬ರಲ್ಲಿ ೩ ಲಕ್ಷವಿದ್ದ ಪ್ರಸರಣ, ಕೇವಲ ಒಂದೇ ವರ್ಷದಲ್ಲಿ ಒಂದು ಲಕ್ಷ ಪ್ರಸರಣ ಹೆಚ್ಚಿಸಿಕೊಳ್ಳುವುದು ಸುಲಭದ ಮಾತಲ್ಲ. ಪತ್ರಿಕೆಯ ಸಂಪಾದಕ ಆರ್.ಜಗನ್ನಾಥನ್. ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದರೆ ಭೇಟಿ ನೀಡಿ;
http://en.wikipedia.org/wiki/Daily_News_&_Analysis
ಸೆಪ್ಟೆಂ12
romal from Midday, Sunayna from Deccan Chronicle, Kavya from Midday, vidya rashmi from vijaya karnataka joined DNA